ಮನಮೋಹನ್ ಸಿಂಗ್ (ಜನನ: ಸೆಪ್ಟೆಂಬರ್ ೨೬, ೧೯೩೨ ಪಶ್ಚಿಮ ಪಂಜಾಬ್ ನ ಗಾಹ್ ನಲ್ಲಿ - ಈಗದು ಪಾಕಿಸ್ತಾನದಲ್ಲಿದೆ) ಭಾರತದ ೧೩ನೆಯ ಪ್ರಧಾನ ಮಂತ್ರಿಗಳು. ಕಾಂಗ್ರೆಸ್ ಪಕ್ಷದ ಸದಸ್ಯರಾದ ಮನಮೋಹನ್ ಸಿಂಗ್, ಮೇ ೨೨ ೨೦೦೪ರಂದು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. "ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿ" ಎಂದು ಮನಮೋಹನ್ ಸಿಂಗ್ ಪ್ರಸಿದ್ಧರಾಗಿದ್ದಾರೆ. ಪಿ ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ 'ವಿತ್ತಮಂತ್ರಿ'ಯಾಗಿ ಮನಮೋಹನ್ ಸಿಂಗ್ ಪರಿಚಯಿಸಿದ ಆರ್ಥಿಕ ಸ್ವತಂತ್ರೀಕರಣ ನೀತಿಗಳು ಭಾರತದ ಆರ್ಥಿಕ ವ್ಯವಸ್ಥೆಯನ್ನು ದುಸ್ಥಿತಿಯಿಂದ ಸುಧಾರಿಸಿದವು ಎನ್ನಲಾಗುತ್ತದೆ. ಪಂಜಾಬ್ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗುವ ಮೊದಲು ಅರ್ಥಶಾಸ್ತ್ರಜ್ಞರಾಗಿ ಕೆಲಸ ಮಾಡಿದವರು. ರಾಜಕೀಯದಲ್ಲಿ ಎಂದಿಗೂ ವಿವಾದ ಸೃಷ್ಟಿಸದ ಮನಮೋಹನ್ ಸಿಂಗ್ ೨೦೦೨ ರಲ್ಲಿ "ಅತ್ಯುತ್ತಮ ಸಂಸದ್ ಸದಸ್ಯ" ಪ್ರಶಸ್ತಿಯನ್ನೂ ಪಡೆದಿದ್ದರು. == ವೃತ್ತಿ ಜೀವನ == ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ (೧೯೫೦) ಪಂಜಾಬ್ ವಿಶ್ವವಿದ್ಯಾಲಯ ಅರ್ಥಶಾಸ್ತ್ರದ ಸೀನಿಯರ್ ಅಧ್ಯಾಪಕರು (೧೯೫೭-೫೭) ರೀಡರ್ (೧೯೫೯-೬೩) ಪ್ರಾಧ್ಯಾಪಕರು (೧೯೬೩-೬೫) ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ (೧೯೬೨) ದೆಹಲಿ ವಿಶ್ವವಿದ್ಯಾಲಯ ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರು (೧೯೬೯-೭೧) ಅರ್ಥಶಾಸ್ತ್ರ ಸಲಹೆಗಾರರು, ಅಂತರರಾಷ್ಟ್ರೀಯ ವ್ಯಾಪಾರ ಖಾತೆ (೧೯೭೧-೭೨) ಮುಖ್ಯ ಅರ್ಥಶಾಸ್ತ್ರ ಸಲಹೆಗಾರರು, ವಿತ್ತ ಖಾತೆ (೧೯೭೨) ಗೌರವ ಪ್ರಾಧ್ಯಾಪಕರು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (೧೯೭೬) ನಿರ್ದೇಶಕರು, ಭಾರತೀಯ ರಿಸರ್ವ್ ಬ್ಯಾಂಕ್ (೧೯೭೬-೮೦) ಕಾರ್ಯದರ್ಶಿಗಳು, ವಿತ್ತ ಖಾತೆ (೧೯೭೭-೮೦) ಗವರ್ನರ್, ಭಾರತೀಯ ರಿಸರ್ವ್ ಬ್ಯಾಂಕ್ (೧೯೮೨-೮೫) ಉಪಾಧ್ಯಕ್ಷರು, ಯೋಜನಾ ಸಮಿತಿ ( ) (೧೯೮೫-೮೭) ವಿತ್ತಮಂತ್ರಿ (ಜೂನ್ ೨೧, ೧೯೯೧ - ಮೇ ೧೫, ೧೯೯೬) ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಭಾರತದ ಪ್ರಧಾನ ಮಂತ್ರಿ (ಮೇ ೨೨, ೨೦೦೪ ರಿಂದ- ಮೇ ೨೬, ೨೦೧೪ ರವರೆಗೆ) == ಬಾಹ್ಯ ಸಂಪರ್ಕಗಳು == ಅಧಿಕೃತ ತಾಣ == ಉಲ್ಲೇಖಗಳು ==